Kannada Beatz
News

ಬಂಡೀಪುರ ಕಾಡಿಗೆ ಬೆಂಕಿ ಇಟ್ಟವನ ಬಂಧನ? ಸುದ್ದಿ ನೋಡಿ

ಕಳೆದ ವಾರ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಅಪಾರವಾದ ಕಾಡು ನಾಶವಾಯಿತು. ರಾಜ್ಯದಲ್ಲೇ ಪ್ರಸಿದ್ಧಿಯನ್ನು ಪಡೆದಿದ್ದ ಬಂಡೀಪುರ ಅರಣ್ಯ ಪ್ರದೇಶ ಹುಲಿ ಸಂರಕ್ಷಣಾ ಪ್ರದೇಶವೂ ಸಹ ಹೌದು. ಬಂಡೀಪುರದಲ್ಲಿ ಆದ ಈ ಬೆಂಕಿ ಅವಘಡದಿಂದ ಸಾವಿರಾರು ಎಕರೆ ಪ್ರದೇಶದ ಅರಣ್ಯ ಪ್ರದೇಶ ನಾಶವಾಗಿದ್ದು ದೊಡ್ಡ ನಷ್ಟವೇ ಸಂಭವಿಸಿದೆ.

ಇನ್ನು ಈ ಬೆಂಕಿ ಕಾಣಿಸಿಕೊಂಡಿದ್ದರ ಹಿಂದಿನ ಕೈ ಯಾರದ್ದು ಎಂಬ ಕುತೂಹಲ ಮತ್ತು ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. ಕಾಡ್ಗಿಚ್ಚು ಸಂಭವಿಸಿದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಕೊಳ್ಳುವುದಿಲ್ಲ ಎಂಬ ಸಂಶಯದಲ್ಲಿ ತನಿಖೆ ಆರಂಭಿಸಿದ ಗೋಪಾಲಸ್ವಾಮಿ ಬೆಟ್ಟ ವಲಯದ ಆರ್ ಎಫ್ಒ ಪುಟ್ಟಸ್ವಾಮಿ ಅವರು ಇದೀಗ ಸಂಶಯಾಸ್ಪದ ಆರೋಪಿಯನ್ನು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಳ್ಳಿಪುರ ನಿವಾಸಿಯಾದ ಅರುಣ್ ಕುಮಾರ್ ಎಂಬಾತ ಫೆ.22 ರಂದು ಬಂಡೀಪುರ ಅರಣ್ಯಕ್ಕೆ ಬೆಂಕಿ ಇಟ್ಟು ತಲೆಮರೆಸಿಕೊಂಡಿದ್ದನು. ಬೆಂಕಿ ಹತ್ತಿದ ತಕ್ಷಣ ಅರಣ್ಯ ವಾಚಕರು ಕಾಡಿಗೆ ನುಗ್ಗಿದ ಪರಿಣಾಮ ಅರುಣ್ ಕುಮಾರ್ ತಲೆಮರೆಸಿಕೊಂಡು ಪಕ್ಕದ ಗ್ರಾಮದ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದನು. ಇದೀಗ ಈತನ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಬಂಧಿಸಿತ್ತು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Related posts

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಕೈಜೋಡಿಸಿದ ಬ್ಲಿಂಕ್ ಮತ್ತು ಶಾಖಹಾರಿ ಪ್ರೊಡ್ಯೂಸರ್ಸ್

Kannada Beatz

ರೆಬಲ್ ಹುಡುಗರ ವಿರಹ ಗೀತೆಗೆ ಎಲ್ಲೆಡೆಯಿಂದ ಪ್ರಶಂಸೆ

Kannada Beatz

ಲೋಕಲ್ ಟು ಗ್ಲೋಬಲ್….ಬಿಡುಗಡೆಗೂ ಮುನ್ನ ‘ಟಾಕ್ಸಿಕ್’ ದಾಖಲೆಗಳ ದಂಡಯಾತ್ರೆ

Kannada Beatz

Leave a Comment

Share via
Copy link
Powered by Social Snap