ಚಂದನವನದ ಲವಲವಿಕೆ ಹೀರೋ ಅನೀಶ್ ತೇಜ್ವರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅನೀಶ್ ಜನುಮದಿನದ ಪ್ರಯುಕ್ತ ಅವರು ನಟಿಸಿ, ನಿರ್ಮಾಣ ಮಾಡಿರುವ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ.
ಅನೀಶ್ ಹತ್ತನೇ ಸಿನಿಮಾ ‘ಬೆಂಕಿ’

ನಮ್ ಏರಿಯಾಲಿ ಒಂದಿನ, ಪೊಲೀಸ್ ಕ್ವಾಟ್ರಸ್, ಅಕಿರ, ವಾಸು ನನ್ ಪಕ್ಕ ಕಮರ್ಷಿಯಲ್, ರಾಮಾರ್ಜುನ ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಗಮನಸೆಳೆದಿರುವ ಅನೀಶ್ ಈಗ, ಬೆಂಕಿ ಸಿನಿಮಾ ಮೂಲಕ ಪ್ರತ್ಯಕ್ಷರಾಗಿದೆ. ಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿ ಅನೀಶ್ ಮಿಂಚಿದ್ದಾರೆ. ಬೆಂಕಿ ಎಂಬ ಕ್ಯಾಚಿ ಟೈಟಲ್ ಇಟ್ಟು.. ಬೆಂಕಿಯಂತಹ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್. ಬಾಬು ಅವರ ಪುತ್ರ, ಶಾನ್ ಎಂಬವರು ಬೆಂಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ಈಗಾಗಲೇ ಸಿನಿಮಾದ ಶೇ. 80ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡು ಮತ್ತು ಒಂದಷ್ಟು ಟಾಕಿ ಭಾಗದ ಶೂಟಿಂಗ್ ಮಾತ್ರ ಬಾಕಿ ಇದೆ.

ಅನೀಶ್ ಗೆ ಜೋಡಿಯಾಗಿ ರೈಡರ್ ಸಿನಿಮಾ ಖ್ಯಾತಿಯ ಸಂಪದ ನಟಿಸಿದ್ದು, ಶೃತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗ ಸಿನಿಮಾದಲ್ಲಿದ್ದೂ, ಕೌಶಿಕ್ ಹರ್ಷ ಸಂಗೀತ ಸಂಯೋಜನೆ, ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ ವರ್ಕ್ ಸಿನಿಮಾದಲ್ಲಿದೆ.
ಅಣ್ಣ ತಂಗಿ ಸೆಂಟಿಮೆಂಟ್ ಕಥೆ ಜೊತೆಗೆ ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದ ಫಸ್ಟ್ ಲುಕ್ ಮಾಸ್ ಲುಕ್ ನಲ್ಲಿ ಮೂಡಿ ಬಂದಿದ್ದು, ಅನೀಶ್ ಸಿನಿಮಾ ಬದುಕಿನ ಹತ್ತನೇ ಸಿನಿಮಾವಾಗಿರುವ ಬೆಂಕಿ ಚಿತ್ರಕ್ಕೆ ಅನೀಶ್ ತಮ್ಮದೇ ವಿಂಕ್ ವಿಷಲ್ ಪ್ರೊಡಕ್ಷನ್ ನಡಿ ಬಂಡವಾಳ ಹೂಡಿದ್ದಾರೆ.

- ಹೀರೋ ಆದ ಸಿಂಪಲ್ ಸುನಿ ಶಿಷ್ಯ…‘ಮೋಡ ಕವಿದ ವಾತಾವರಣʼಕ್ಕೆ ಯುವ ಪ್ರತಿಭೆ ಶೀಲಮ್ ನಾಯಕ
- ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ “ರಾಜನಿವಾಸ” ..
- ಸ್ಯಾಂಡಲ್ವುಡ್ ನ ಭರವಸೆಯ ನಟ ಕಿರಣ್ ರಾಜ್ ಹುಟ್ಟು ಹಬ್ಬದಂದು ಸಿಕ್ಕಿತು ಮತ್ತೊಂದು ಗುಡ್ ನ್ಯೂಸ್
- ಅಂದೊಂದಿತ್ತು ಕಾಲ” ಚಿತ್ರದ ಎರಡನೇ ಹಾಡು ‘ಅರೇರೇ ಯಾರೋ ಇವಳು..’ ಬಿಡುಗಡೆ ಮಾಡಿದ ಶಾಲಾ ವಿದ್ಯಾರ್ಥಿಗಳು
- (no title)
- ಕೆವಿಎನ್ ಪ್ರೊಡಕ್ಷನ್ ನಿಂದ “ಜನ ನಾಯಗನ್” ಬರ್ತಡೆ ಪೋಸ್ಟರ್ ಬಿಡುಗಡೆ
- ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದೆ “ಮತ್ತೆ ಮೊದಲಿಂದ” ಗೀತಗುಚ್ಛ(ಆಲ್ಬಂ) .
- ಉತ್ತರ ಕರ್ನಾಟಕ ಪ್ರತಿಭೆಗಳ ಹೆಬ್ಬುಲಿ ಕಟ್ ಟ್ರೇಲರ್ ರಿಲೀಸ್..ಸಿನಿಮಾ ಪ್ರೆಸೆಂಟ್ ಮಾಡುತ್ತಿರುವ ಸತೀಶ್ ನೀನಾಸಂ
- ಗೆಲ್ಲುವ ಕುದುರೇ ಮಾದೇವRatings **** 4/5
- *ಅಮೆರಿಕದ ಪ್ಲೋರಿಡಾದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ…*
