Kannada Beatz
News

ನಾವೆಲ್ಲಾ ಡಮ್ಮಿ. ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ – ದರ್ಶನ್..!

ಇಂದು ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಬಿಡುಗಡೆಗೊಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಟ ದರ್ಶನ್ ಅವರು ತಮ್ಮ ಯಜಮಾನ ಚಿತ್ರದ ಬಗ್ಗೆ ಮಾತನಾಡಿದರೂ ಹಾಗೆಯೇ ನಮ್ಮ ಭಾರತದ ವೀರ ವಿಂಗ್ ಕಮಾಂಡರ್ ಅಭಿನಂದನ್ ಅವರ ಪತಿಯೂ ಸಹ ಮಾತನಾಡಿದರು.

ನಿಮಗೆಲ್ಲ ತಿಳಿದಿರುವ ಹಾಗೆ ಅಭಿನಂದನ್ ಅವರನ್ನು ಪಾಕಿಸ್ತಾನ ಆರ್ಮಿ ಸೆರೆ ಹಿಡಿದು ಬಂಧನದಲ್ಲಿ ಇಟ್ಟುಕೊಂಡಿತ್ತು. ಇದೀಗ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದ್ದು ಇಂದು ಭಾರತ ದೇಶಕ್ಕೆ ಅವರು ಮರಳುತ್ತಿದ್ದಾರೆ. ಈ ಕುರಿತಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲರೂ ಮೆಚ್ಚಿಕೊಳ್ಳುವಂತಹ ಉತ್ತರವನ್ನು ನೀಡಿದ್ದಾರೆ.

ನಾವೆಲ್ಲ ಯಾವ ಹೀರೋ ಸರ್ ನಾವು ಡಮ್ಮಿ ನಿಜವಾದ ಹೀರೋ ಎಂದರೆ ಅಭಿನಂದನ್ ಅವರು ಎಂದು ದರ್ಶನ್ ಅವರು ತಿಳಿಸಿದ್ದಾರೆ. ನಾವು ತೆರೆಯ ಮೇಲೆ ನಟಿಸುತ್ತೇವೆ ಅಷ್ಟೇ ಆದರೆ ಬಾರ್ಡರ್ ನಲ್ಲಿ ನಿಂತು ದೇಶವನ್ನು ಕಾಯುವವರು ನಿಜವಾದ ಹೀರೋ ಎಂಬ ಮಾತುಗಳನ್ನು ದರ್ಶನ್ ಅವರು ಆಡಿದ್ದಾರೆ.

Related posts

ನರೇಂದ್ರ ಮೋದಿ ವಾಟ್ ಇಂಡಿಯಾ ಥಿಂಕ್ಸ್ ಟುಡೇ tv9 ನೆಟ್ವರ್ಕ್ ಶೃಂಗಸಭೆಯಲ್ಲಿ ಭಾಗವಹಿಸಿದರು

Kannada Beatz

ಕೋಮಲ್ ಕುಮಾರ್ ಅಭಿನಯದ “ಯಲಾಕುನ್ನಿ” ಮೇರಾ ನಾಮ್ ವಜ್ರಮುನಿ..! ಚಿತ್ರ ಆರಂಭ.
ವಜ್ರಮುನಿ ಮೊಮ್ಮಗ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ..!

Kannada Beatz

ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಬಹು ನಿರೀಕ್ಷಿತ “ಫಾದರ್” ಚಿತ್ರಕ್ಕೆ ಮಾತಿನ ಜೋಡಣೆ ಮುಕ್ತಾಯ .

Kannada Beatz

Leave a Comment

Share via
Copy link
Powered by Social Snap