Kannada Beatz
News

ರಣ ಚಿತ್ರದ ಟ್ರೈಲರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.🔥🔥

ದುರ್ಗಾ ಕ್ರಿಯೇಷನ್ಸ್ ವಿಟ್ಲ ಮೈರ, ಕೇಪು ಹಾಗೂ ಮೈತ್ರಿ ಸ್ಟುಡಿಯೋ ಅಡ್ಯನಡ್ಕ ಇದರ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ರಣ ಚಿತ್ರದ ಟ್ರೈಲರ್ ಕನ್ನಡ ಮತ್ತು ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ರಣ ಚಿತ್ರವು ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯ ಮತ್ತು ಅತ್ಯಾಚಾರದ ಬಗೆಗಿನ ಸಿನಿಮಾ ಇದಾಗಿದ್ದು, ಚಿತ್ರದ ಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಾಯಕ ನಟನಾಗಿ – ನಿತಿನ್ ಹೊಸಂಗಡಿ, ಚಿತ್ರಕಥೆ ಮತ್ತು ನಿರ್ದೇಶನ – ಪ್ರವೀಣ್ ರಾಜ್, ಸಂಗೀತ – ಗುರು ಬಾಯಾರು, ಗಾಯಕರು – ಶಮೀರ್ ಮುಡಿಪು, ಇಬ್ಬ ಕಡಂಬು ಮತ್ತು ಚೈತ್ರ ಕಲ್ಲಡ್ಕ. ಛಾಯಾಗ್ರಹಣ – ಸಜಿತ್ ಕುಮಾರ್. ಸಂಕಲನ – ಮೈತ್ರಿ ಸ್ಟುಡಿಯೋ ಅಡ್ಯನಡ್ಕ. ಮೇಕಪ್ – ರವಿ ಸಿಂಗೇರಿ, ದ್ವನಿ ಮತ್ತು ಬೆಳಕು – ಸಿದ್ದಿಕ್ ಸಿ.ಯಂ ಸೌಂಡ್ಸ್ ಅಡ್ಯನಡ್ಕ.


ಕಲಾವಿದರು ನಿತಿನ್ ಹೊಸಂಗಡಿ, ಶ್ರೇಯಸ್ ಪಾಟಾಳಿ ಕೇಪು, ಶಮಿತ, ಸಚಿನ್ ಮನೀಶ್, ದಾಮು ಅಮೈ, ನಿಶ್ಮಿತಾ, ವಿನೋದ್ ಕೇಪು, ದೀಕ್ಷಿತ್, ರ‍್ಷಿತಾ, ಚೈತನ್ಯ, ಪ್ರವೀಣ್ ಅಮೈ, ಪದ್ಮನಾಭ ಕಲ್ಲಂಗಳ, ಪ್ರಜ್ವಲ್ ಉಕ್ಕುಡ, ರ‍್ಷಿತಾ ಯನ್ ಹೊಸಂಗಡಿ, ರಾಜಶೇಖರ ಮರಕಿಣಿ, ಗೋವಿಂದರಾಯ ಶೆಣೈ, ಕಾವ್ಯ ಮಣಿಮುಂಡ, ಭವಿತ್ ರಾಜ್, ಅಕ್ಷತಾ ಬಿ ಸಿ ರೋಡ್, ಸಂತೋಷ ಕರವೀರ, ರಾಜೇಶ್ ಕರವೀರ, ರಾಜೇಶ್ ಪುಚ್ಚೆಗುತ್ತು, ಕಿರಣ್ ರಾಜ್, ಮನೋಜ್, ಮಿಥುನ್, ಉಮೇಶ್, ಜಯಂತ್ ಕೇಪು, ಗಿರೀಶ್, ಚಂದಪ್ಪ ಕೇಪು ಮುಂತಾದವರು. ಸಂಪರ‍್ಣ ಸಹಕಾರ ತ್ರಿಶೂಲ್ ಫ್ರೆಂಡ್ಸ್ ಕೇಪು
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಟಿ ರುಕ್ಮಿಣಿ ವಸಂತ್ ರಣ ಚಿತ್ರದ ಟ್ರೈಲರ್ ವೀಕ್ಷಿಸಿ ‘ರಣ ಚಿತ್ರದ ಟ್ರೈಲರ್ ಅಧ್ಬುತವಾಗಿದೆ’ ಎಂದು ಶುಭಹಾರೈಸಿದರು. ಹಾಗೂ ಹಲವಾರು ಚಿತ್ರನಟ, ನಟಿಯರು ರಣ ಚಿತ್ರದ ಟ್ರೈಲರ್ ವೀಕ್ಷಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು

Related posts

ಭಾವಚಿತ್ರ”ದ ಹಾಡುಗಳ ಬಿಡುಗಡೆ*

administrator

*’ರಾವಣ ರಾಜ್ಯದಲ್ಲಿ ನವದಂಪತಿ’ಗಳಾದ ಯುವ ಪ್ರತಿಭೆ ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗ್ಡೆ


*ನಿರ್ಮಾಪಕರಾದ ಬಡವ ರಾಸ್ಕಲ್ ಡೈರೆಕ್ಟರ್… ರಾವಣ ರಾಜ್ಯದಲ್ಲಿ ನವದಂಪತಿಗಳಿಗೆ ಸಾಥ್ ಕೊಟ್ಟ ಶಂಕರ್ ಗುರು*


‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸೂತ್ರಧಾರ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ‌ ರಾವಣ ರಾಜ್ಯದಲ್ಲಿ ನವದಂಪತಿಗಳು ಎಂಬ ಕನಸಿಗೆ ಶಂಕರ್ ಗುರು ಸಾಥ್ ಕೊಟ್ಟಿದ್ದಾರೆ. ಅಂದಹಾಗೇ ಈ ಚಿತ್ರದ ಪ್ರಮುಖ‌ ಪಿಲ್ಲರ್ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ.


ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾಗೆ ಯುವ ಪ್ರತಿಭೆ ರಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ಪ್ರಸಾದ್ ಗರಡಿಯಲ್ಲಿ ಕೋ ಡೈರೆಕ್ಟರ್ ಆಗಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ನಿರ್ದೇಶನದ ಪಟು ಕಲಿತುಕೊಂಡಿರುವ ರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಯುವ ಪ್ರತಿಭೆ ಅರುಣ್ ಸೂರ್ಯ ಹಾಗೂ ಡೊಳ್ಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ  ಜೋಡಿಯಾಗಿ ನಟಿಸಿದ್ದಾರೆ.



ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್ ಟಿಎ ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ. ಡಾರ್ಕ್ ಸೋಷಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದ್ದು,  ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾವನ್ನು ಕನ್ನಡ‌ ಫಿಲ್ಮಿ ಕ್ಲಬ್ ಸಿನಿಮಾ ಬಿಡುಗಡೆ ಕಾರ್ಯಕ್ಕೆ ಸಾಥ್ ಕೊಡಲಿದೆ.

Kannada Beatz

ಬಸು ಕುಮಾರ್ ಈಗ “ಡಿಟೆಕ್ಟಿವ್‌ ಗಜವದನ” .

Kannada Beatz

Leave a Comment

Share via
Copy link
Powered by Social Snap