Kannada Beatz
News

ಮೇಲುಕೋಟೆಯಲ್ಲಿ ‘ಸೆಲೆಬ್ರಿಟಿ’ ಸಾಂಗ್ ಶೂಟ್..ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಅಶ್ವಿನ್-ಪ್ರಿಯಾಂಕಾ ಕುಣಿತ

ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ‘ಸೆಲೆಬ್ರಿಟಿ’ ಕಪಲ್ ಸಾಂಗ್..ಅಶ್ವಿನ್-ಪ್ರಿಯಾಂಕಾ ಹೆಜ್ಜೆ

ಗೌರಿ ಆರ್ಟ್ಸ್ ಬ್ಯಾನರ್‌ನಡಿ ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಸಿನಿಮಾ ಸೆಲೆಬ್ರಿಟಿ. ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪರಿಯಚವಾಗುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇಂದು ಮೇಲುಕೋಟೆಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ನಾಯಕ ಹಾಗೂ ನಾಯಕಿ ನಡುವಿನ ಕಪಲ್ ಸಾಂಗ್ ಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ನಾಯಕ ಅಶ್ವಿನ್ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಹೆಜ್ಜೆ ಹಾಕಿದ್ದಾರೆ.

ಹಾಡಿನ ಚಿತ್ರೀಕರಣದ ಚಿತ್ರೀಕರಣದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸುದ್ದಿಗೋಷ್ಟಿ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಮಾತನಾಡಿ, ಇದು ಮೆಲೋಡಿ ಸಾಂಗ್. ದೊಡ್ದ ಸ್ಟಾರ್ ಗೆ ಕೊರಿಯೋಗ್ರಫಿ ಮಾಡುವಾಗ ಕಷ್ಟವಾಗುತ್ತದೆ. ಅವರಿಗೆ ಅವರದ್ದೇ ಆದ ಇಮೇಜ್ ಇರುತ್ತದೆ. ಆ ಇಮೇಜ್ ಮ್ಯಾಚ್ ಮಾಡುವ ರೀತಿ ಕೊರಿಯೋಗ್ರಫಿ ಮಾಡಬೇಕು. ಆದರೆ ಹೊಸಬರು ಎಫರ್ಟ್ ಹಾಕಿ ಮಾಡುತ್ತಾರೆ.‌ ಅವರು ಬೆಸ್ಟ್ ಕೊಡಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ ಇವರಿಗೆ ಹೇಳಿ ಕೊಡುವುದು ಸುಲಭ. ಹೊಸಬರು ಇದ್ರೆ ನಾವು ಮತ್ತಷ್ಟು ಕ್ರಿಯೇಟಿವಿಟಿಯಾಗಿ ಕೆಲಸ ಮಾಡುತ್ತೇವೆ. ಅಶ್ವಿನ್ ಈ ಹಾಡಿಗೆ ನಾಲ್ಕು ದಿನ ರಿಹರ್ಸಲ್ ಮಾಡಿದ್ದಾನೆ. ಅವನು ತುಂಬಾ ಹಾರ್ಡ್ ವರ್ಕರ್. ನನಗೋಸ್ಕರ ಈ ತಂಡ ಒಂದೂವರೆ ವರ್ಷದಿಂದ ಕಾದಿದೆ. ನಾವು ಮಾಡಿದರೆ ಇವರ ಜೊತೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಹೀಗಾಗಿ ಈ ತಂಡದ ಜೊತೆ ಕೈ ಜೋಡಿಸಿದೆ ಎಂದರು.

ನಟ ಅಶ್ವಿನ್ ಮಾತನಾಡಿ, ಚಿತ್ರದಲ್ಲಿ ಕಪಲ್ ಸಾಂಗ್ ಇದೆ.‌ ಅದನ್ನು ಮೇಲುಕೋಟೆಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಅದರಂತೆ ಇವತ್ತು ಮೇಲುಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಾನಿ ಮಾಸ್ಟರ್ ಮೇಲುಕೋಟೆಯಲ್ಲಿ ಮೊದಲ ಬಾರಿಗೆ ಭಾಗಿಯಾಗಿ ಕೊರಿಯೋಗ್ರಫಿ ಮಾಡಿದ್ದಾರೆ. ನನಗೆ ಜಾನಿ ಮಾಸ್ಟರ್ ಎಂದರೆ ಇಷ್ಟ. ಈ ಚಿತ್ರದಲ್ಲಿ ಹುಕ್ ಸ್ಟೆಪ್ಸ್ ನಿರೀಕ್ಷೆ ಮಾಡಬಹುದು. ಜಾನಿ ಮಾಸ್ಟರ್ ಸುಲಭವಾದ ಸ್ಟೆಪ್ಸ್ ಹೇಳಿ ಕೊಡುವುದಿಲ್ಲ. ಹೀರೋಯಿನ್ ಹೊಗಳುವ ಹಾಡು ಇದಾಗಿದೆ ಎಂದು ಹೇಳಿದರು.

ನಟಿ ಪ್ರಿಯಾಂಕಾ ಆಚಾರ್, ಇದೊಂದು ಒಳ್ಳೆ ತಂಡ. ಈ ಟೀಂ ಜೊತೆ ಹಾಗೂ ಪ್ರೊಡಕ್ಷನ್ ಹೌಸ್ ಜೊತೆ ಕೆಲಸ ಮಾಡುವ ಅದೃಷ್ಟ ನನ್ನದಾಗಿದೆ. ಇನ್ನೂ ಹತ್ತು ದಿನ ಮಾತ್ರ ನನ್ನ ಭಾಗದ ಚಿತ್ರೀಕರಣ ಇದೆ. ಶೂಟಿಂಗ್ ಗೂ ಮೊದಲು ವರ್ಕ್ ಶಾಪ್ ಮಾಡುತ್ತೇವೆ. ಅಶ್ವಿನ್ ಸರ್ ತುಂಬಾ ಹಾರ್ಡ್ ವರ್ಕರ್. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ‌ಸಿರಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾನು ಯೂಟ್ಯೂಬರ್ ಆಗಿ ನಟಿಸುತ್ತಿದ್ದೇನೆ. ನಮ್ಮ ನಿರ್ಮಾಪಕಿ ಸುಷ್ಮಾ ಮೇಡಂ ತುಂಬಾ ಸ್ವೀಟ್. ತುಂಬಾ ಕೂಲ್. ಇವತ್ತು ನನ್ನ ಹೊಗಳುವ ಹಾಡನ್ನು ಚಿತ್ರೀಕರಣ ಮಾಡಿದ್ದೇವೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಹೆಜ್ಜೆ ಹಾಕಿರುವುದು ಖುಷಿ ಎಂದರು.

ಕಿರಣ್ ವಿಶ್ವನಾಥ್ ʻಸೆಲೆಬ್ರಿಟಿʼ ಚಿತ್ರವನ್ನ ನಿರ್ದೇಶಿಸಲಿದ್ದಾರೆ. ʻಯಾರೇ ನೀನು ಚೆಲುವೆʼ ಸಿನಿಮಾ ಖ್ಯಾತಿಯ ಸಂಗೀತಾ ಅವರು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಆಗುತ್ತಿದ್ದಾರೆ. ಈ ಚಿತ್ರವನ್ನ ಸುರೇಶ್ ಬಾಬು ಸಿಬಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ, ಗುಣ ಕಲಾ ನಿರ್ದೇಶನ, ಅನಿರುದ್ಧ್ ಶಾಸ್ತ್ರೀ ಸಾಹಿತ್ಯ ಹಾಡುಗಳಿಗಿದೆ.

Related posts

ಡಾಲಿ ಧನಂಜಯ ಅಭಿನಯದ ಹೊಯ್ಸಳ” ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ .

Kannada Beatz

ಹೊಸಬರ ‘ಧರ್ಮಂ’ ಸಿನಿಮಾದ ಟೈಟಲ್ ಲಾಂಚ್

Kannada Beatz

‘ಕಾಂತಾರ 2’ರ ಮ್ಯೂಸಿಕಲ್ ಮ್ಯಾಜಿಕ್ ಅಜನೀಶ್ ಲೋಕನಾಥ್, ‘ಮಾರ್ಕೋ’ ನಿರ್ಮಾಪಕ ಶರೀಫ್ ಮೊಹಮ್ಮದ್ ಈಗ ‘ಕಾಟ್ಟಾಲನ್’ಗೆ ಒಂದಾಗಿದ್ದಾರೆ!

Kannada Beatz

Leave a Comment

Share via
Copy link
Powered by Social Snap