Kannada Beatz
News

🎵 ‘ಜೊತೆಯಾಗಿ ಹಿತವಾಗಿ’ ಚಿತ್ರದ “ಅರೆರೆರೆ” ಹಾಡಿಗೆ ಭಾರೀ ಸದ್ದು – ಬೆಳಗಾವಿ ನಿತಿನ್ ಹಾಗೂ ಸುವರ್ತಾ ಎಮೋಶನಲ್ ಜೋಡಿ ಪ್ರೇಕ್ಷಕರ ಮನಸ್ಸಲ್ಲಿ ಲಗ್ಗೆ

“ಅರೆರೆರೆ” ಹಾಡಿಗೆ ಭಾರೀ ಸ್ಪಂದನೆ – “ಜೊತೆಯಾಗಿ ಹಿತವಾಗಿ” ಚಿತ್ರದ ಮೂಲಕ ನಟ ಬೆಳಗಾವಿ ನಿತಿನ್ ಮೆರೆಸಿದ ಎಮೋಶನಲ್ ಮೆಜಿಕ್!
ಜೊತೆಯಾಗಿ ಹಿತವಾಗಿ ಚಿತ್ರದ “ಅರೆರೆರೆ” ಹಾಡು ಎಲ್ಲೆಡೆ ವೈರಲ್ ನಟ ಬೆಳಗಾವಿ ನಿತಿನ್ ಸೂಪರ್ ಎನರ್ಜಿ

ಅತ್ಯಂತ ಭಾವನಾತ್ಮಕವಾಗಿ ಮೂಡಿ ಬಂದಿರುವ “ಅರೆರೆರೆ” ಎಂಬ ಗೀತೆಯು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಹಾಡುಗಳಲ್ಲಿ ಒಂದು ಎನಿಸಿದೆ. ‘ಜೊತೆಯಾಗಿ ಹಿತವಾಗಿ’ ಚಿತ್ರದಲ್ಲಿನ ಈ ಹಾಡು ಗಾನ, ಸಾಹಿತ್ಯ ಹಾಗೂ ದೃಶ್ಯ ವೈಭವದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದೆ.

ಈ ಹಾಡಿನಲ್ಲಿ ನಟ ಬೆಳಗಾವಿ ನಿತಿನ್ ಮತ್ತು ನಟಿ ಸುವಾರ್ತಾ ಅವರು ಜೋಡಿಯಾಗಿ ಕಾಣಿಸಿಕೊಂಡಿದ್ದು, ಅವರ ನಡುವಿನ ನಟನೆ, ಭಾವನೆ, ಎಕ್ಸ್‌ಪ್ರೆಷನ್ ಎಲ್ಲವೂ ಹಾಡಿನ ಥೀಮ್‌ಗೆ ಪೂರಕವಾಗಿದೆ. ನಿತಿನ್ ಅವರ ನೈಸರ್ಗಿಕ ಅಭಿನಯ, ನೃತ್ಯ ಮತ್ತು ಕಣ್ಣುಗಳಿಂದ ಮೂಡಿಸುವ ಕತೆ ಹಾಡನ್ನು ಮತ್ತಷ್ಟು ಜೀವಂತವಾಗಿಸುತ್ತದೆ. ಸುವಾರ್ತಾ ಅವರ ಭಾವಪೂರ್ಣ ಅಭಿನಯವು ಹಾಡಿಗೆ ಅಗತ್ಯವಿದ್ದ ಎಮೋಶನಲ್ ಶಕ್ತಿ ನೀಡಿದೆ.

ಪೂರ್ಣವಾಗಿ ಅಚ್ಚ ಕನ್ನಡದಲ್ಲಿ ಬರೆಯಲ್ಪಟ್ಟ ಈ ಹಾಡು, ಯಾವುದೇ ಇತರೆ ಭಾಷೆಯ ಪದಗಳಿಲ್ಲದೆ ಶುದ್ಧ ಭಾಷೆಯ ಸವಿಯನ್ನು ನೀಡುತ್ತದೆ. ಇದು ಭಾಷೆಯ ಹೆಮ್ಮೆ ಎನಿಸುತ್ತಿದೆ. ಇದರ ಸಾಹಿತ್ಯವನ್ನು ಖ್ಯಾತ ನಿರ್ದೇಶಕ ಮತ್ತು ಲೇಖಕರಾದ ಅರಸು ಅಂತಾರೆ ರಚಿಸಿದ್ದು, ಅವರ ನುಡಿಪಾಠದ ಔಜಸ್ಸು ಪ್ರತಿಯೊಂದು ಸಾಲಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಜೈಪಾಲ್ ನೀಡಿರುವ ಸಂಗೀತದಲ್ಲಿ ಭಾವನೆಗೂ ಮಿಡಿತವು ಸಮತೋಲನವಿದೆ. ಗಾಯಕ ಸಂತೋಷ್ ವೆಂಕಿ ಅವರ ಧ್ವನಿಯಲ್ಲಿ ಹಾಡಿನ ಅರ್ಥಗರ್ಭಿತತೆ ಇನ್ನಷ್ಟು ಗಂಭೀರತೆ ಹೊಂದುತ್ತದೆ.

ಈ ಚಿತ್ರದ ದೃಶ್ಯಶಿಲ್ಪ, ಲಿರಿಕ್ಸ್, ಎಡಿಟಿಂಗ್, ಛಾಯಾಗ್ರಹಣ ಸೇರಿದಂತೆ ಎಲ್ಲವನ್ನೂ ನಿರ್ದೇಶಕರಾದ ಎ ಆರ್ ಕೃಷ್ಣ ತಾವು ಖುದ್ದಾಗಿ ನಿರ್ವಹಿಸಿದ್ದು, ಅವರ ಬಹುಮುಖ ಪ್ರತಿಭೆ ಚಿತ್ರಕಲೆಯ ಮೇಲೆ ಅವರ ಪ್ರೀತಿಯ ಸಾಕ್ಷಿಯಾಗಿದೆ.

ಈ ಹಾಡು ಯೂಟ್ಯೂಬ್‌ನಲ್ಲಿ ಈಗಾಗಲೇ ಭಾರೀ ಸ್ಪಂದನೆ ಪಡೆದು, ಟ್ರೆಂಡಿಂಗ್‌ ಆಗುತ್ತಿದೆ. ಪ್ರೇಕ್ಷಕರ ಪ್ರಾಮಾಣಿಕ ಕಮೆಂಟ್‌ಗಳು, ಹಂಚಿಕೆಗಳು ಹಾಡಿನ ಪ್ರಭಾವವನ್ನು ತೋರಿಸುತ್ತಿವೆ.

ಈ ಹಾಡಿನ ಯಶಸ್ಸಿಗೆ ಪ್ರತಿಕ್ರಿಯೆ ನೀಡಿದ ನಟ ಬೆಳಗಾವಿ ನಿತಿನ್, “ಇತ್ತೀಚೆಗೆ ಬೇರೆ ಭಾಷೆಯ ಹಾಡುಗಳು ಹೆಚ್ಚು ಟ್ರೆಂಡ್ ಆಗುತ್ತಿವೆ. ಆದರೆ ನಮ್ಮ ‘ಅರೆರೆರೆ’ ಹಾಡು ಕೂಡ ಟ್ರೆಂಡ್ ಆಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ದಯವಿಟ್ಟು ಎಲ್ಲರೂ ಈ ಹಾಡನ್ನು ನೋಡಿ, ರೀಲ್ಸ್ ಮಾಡಿ, ಯೂಟ್ಯೂಬ್‌ನಲ್ಲಿ ಕಮೆಂಟ್ ಮಾಡಿ, ಹಂಚಿಕೊಳ್ಳಿ. ನಮ್ಮ ಶುದ್ಧ ಕನ್ನಡ ಗೀತೆಗೆ ಬೆಂಬಲ ನೀಡೋಣ” ಎಂದು ವಿನಂತಿಸಿದ್ದಾರೆ.

ನಿತಿನ್ ಹಲವು ಕಿರುಚಿತ್ರಗಳು, ಮ್ಯೂಸಿಕ್ ವಿಡಿಯೋಗಳು, ಕವರ್ ಸಾಂಗ್‌ಗಳ ಮೂಲಕ ತಮ್ಮ ಪಯಣ ಆರಂಭಿಸಿ ಈಗ ತಮ್ಮ ಮೊದಲ ಚಿತ್ರದಲ್ಲಿಯೇ ಗಮನ ಸೆಳೆದಿದ್ದಾರೆ. ಅವರ ಶ್ರಮ, ಭಾವನೆ ಹಾಗೂ ನಿಷ್ಠೆ ಈ ಹಾಡಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ.

‘ಅರೆರೆರೆ’ ಗೀತೆ ಕನ್ನಡ ನಾಡಿಗೆ ಕೇವಲ ಒಂದು ಹಾಡಲ್ಲ; ಅದು ಒಂದು ಭಾವನೆ, ಒಂದು ನೆನಪು, ಒಂದು ನಾದ…

Related posts

ವಿಕ್ರಾಂತ್‌ರೋಣನ ಅದ್ಭುತ ಲೋಕವನ್ನು
ತಮ್ಮ ಭಾಷೆಯಲ್ಲೇ ನೋಡೋ ಅವಕಾಶ

Kannada Beatz

ಬಂಡೀಪುರ ಕಾಡಿಗೆ ಬೆಂಕಿ ಇಟ್ಟವನ ಬಂಧನ? ಸುದ್ದಿ ನೋಡಿ

administrator

ಕೋರ’ ಟೀಸರ್ ರಿಲೀಸ್ ಮಾಡಿದ ಧ್ರುವ ಸರ್ಜಾ- ಒರಟ ಶ್ರೀ ನಿರ್ದೇಶನ ಪ್ಯಾನ್ ಇಂಡಿಯಾ ಸಿನಿಮಾ ‘ಕೋರ’

Kannada Beatz

Leave a Comment

Share via
Copy link
Powered by Social Snap