Kannada Beatz
News

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ವಾಸುಕಿ ವೈಭವ್ ಹಾಡಿರುವ ಈ ಆಲ್ಬಂ ಸಾಂಗ್.

ಕಾಶ್ಮೀರದಲ್ಲಿ “ನಿನದೇ ನೆನಪು”.

ಜನಪ್ರಿಯ ಗೀತರಚನೆಕಾರ ಗೌಸ್ ಫಿರ್ ಬರೆದಿರುವ ” ಹೃದಯಕ್ಕೆ ಹೃದಯವೇ ಕಡು ವೈರಿ” ಎಂದು ಆರಂಭವಾಗುವ “ನಿನದೇ ನೆನಪು” ಎಂಬ ಶೀರ್ಷಿಕೆ ಯುಳ್ಳ ಈ ಆಲ್ಬಂ ಸಾಂಗ್ ಸ್ವತಂತ್ರ ದಿನಾಚರಣೆಯ ದಿನ ಬಿಡುಗಡೆಯಾಗಿದೆ.

ಈ ಆಲ್ಬಂ ಕನ್ನಡದ ಬಹು ಅದ್ದೂರಿ ನಿರ್ಮಾಣ ಎಂದೇ ಹೇಳಬಹುದು, ಯಾಕೆಂದರೆ ಇದರ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್‌ ನಲ್ಲಿ ನಡೆದಿದೆ ಎಂದರೆ ಈ ಆಲ್ಬಂ ಹಾಡಿನ ನಿರ್ಮಾಣದ ವೈಭವವನ್ನು ಹೇಳಬಹುದು.

ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ.

ಸರವಣ್ ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರ ಬಿಡುಗಡೆ ಹಂತದಲ್ಲಿದೆ.
ಟಿಕ್ ಟಾಕ್ ಮೂಲಕ ಮನೆಮಾತಾಗಿರುವ ಪ್ರತಿಮ ಈಗಾಗಲೇ ಕೆಲವು ಆಲ್ಬಂ ಗಳಲ್ಲಿ ನಟಿಸಿದ್ದಾರೆ.

ಈ ಆಲ್ಬಂ ನಿರ್ಮಾಣ ಮಾಡಿದವರು ಆಂಜಿ ಬಾಬು ಎಂಬುವವರು, ಅವರಿಗೆ ಬೆಂಬಲವಾಗಿ ನಿಂತವರು ಫೈಯಿಂಗ್ ಕಿಂಗ್ ಮಂಜು ಎಂಬುವವರು.

ಈ ಮೊದಲು ಮಯೂರ್ ಪಟೇಲ್ ಅಭಿನಯದ ರಾಜೀವ ಚಿತ್ರವನ್ನೂ ಮಂಜು ನಿರ್ದೇಶಿಸಿದ್ದಾರೆ.

ಈ ಹಾಡನ್ನು ನಿರ್ದೇಶಿಸಿರುವವರು ಎಂ. ವೈ. ಕೃಷ್ಣ, ಇವರಿಗೆ ನಿರ್ದೇಶನದ ಅನುಭವವೂ ಇದೆ, ಅವರು ಮುಂದಿನ ದಿನಗಳಲ್ಲಿ ಸ್ವತಂತ್ರ ನಿರ್ದೇಶಕನಾಗುವ ಕನಸೂ ಇದೆ, ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಹಾಡನ್ನು ನಿರ್ದೇಶಿಸಿದ್ದಾರೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ, ಹಾಡಿನಲ್ಲಿ ಕಾಶ್ಮೀರದ ಮನಮೋಹಕ ಸನ್ನಿವೇಶಗಳು ಕಣ್ಣಿಗೆ ಮುದ ನೀಡುತ್ತಲೇ ಸಾಗುತ್ತದೆ. ಈ ಹಾಡಿನ ಮತ್ತೊಂದು ಹೆಚ್ಚುಗಾರಿಕೆ ಎಂದರೆ ವಾಸುಕಿ ವೈಭವ್ ಅವರ ಸುಮಧುರ ಗಾಯನ ಹಾಗೂ ರೋಹಿತ್ ಸೊವಾರ್ ಅವರ ಸಂಗೀತ ನಿರ್ದೇಶನ.

ಹಾಡಿನ ಛಾಯಾಗ್ರಹಣ ಮಾಡಿದವರು ಕಾರ್ತಿಕ್ . ಈ ಹಾಡನ್ನು ನಿರ್ಮಾಣ ಮಾಡಿದ್ದು ಚಾಣಕ್ಯ ಪಿಲಂಸ್. ಆಲ್ಬಂ ಬಿಡುಗಡೆಗೆ ರಾಜಕಾರಣಿ *ನರೇಂದ್ರ ಬಾಬು* , ನಿರ್ಮಾಪಕ *ಸಯ್ಯದ್ ಸಲಾಂ* , *ರಮೇಶ್* ಆಗಮಿಸಿದ್ದರು.

ಈ ಹಾಡಿನ ಸಾಹಿತ್ಯ, ಚಿತ್ರೀಕರಣವಾದ ಶೈಲಿ, ಅದಕ್ಕೆ ಆಯ್ಕೆ ಮಾಡಿಕೊಂಡ ಸುಂದರ ಸ್ಥಳಗಳು, ಖರ್ಚು ಮಾಡಿರುವ ರೀತಿ ನೋಡಿದರೆ ನಿನದೇ ನೆನೆಪು ಆಲ್ಬಂ ಸಾಂಗ್ ಕನ್ನಡದಲ್ಲಿ ನಂ. ಒನ್ ಸ್ಥಾನದಲ್ಲಿ ನಿಲ್ಲಬಹುದು, ಅಷ್ಟು ಸುಂದರ ಮತ್ತು ಮಧುರವಾಗಿದೆ.

Related posts

ವಿನಯ್ ಪ್ರೇಮಕಥೆಯ ಮತ್ತೊಂದು ಹಾಡು ಬಿಡುಗಡೆ…ಕೇಳಿ ಸೂಫಿ ಶೈಲಿ ಸರಳ ಗೀತೆ…

Kannada Beatz

ಸೆಂಟ್ರಲ್ ಜೈಲಿನಲ್ಲಿರುವ ಖೈದಿಯೊಬ್ಬರಿಂದ ತತ್ವ ಪದ ಹಾಡಿಸಿದ ಪ್ರೇಮಕವಿ ಕೆ. ಕಲ್ಯಾಣ್

Kannada Beatz

ಸದ್ದು ಮಾಡುತ್ತಿದೆ “ಸಾವಿತ್ರಿ” ಚಿತ್ರದ ಹಾಡುಗಳು.

Kannada Beatz

Leave a Comment

Share via
Copy link
Powered by Social Snap