Kannada Beatz
News

ಫೋಟೋಗಾಗಿ ನದಿಗೆ ಇಳಿದವರ ಪ್ರಾಣವೇ ಹೋಯ್ತು..! ನೋಡಿ.

ಮೋಜಿಗಾಗಿ ನದಿಗಿಳಿದ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿರುವ ಘಟನೆ ತೆಲಂಗಾಣದ ಜನಗಾಮ ಜಿಲ್ಲೆಯ ನರ್ಮೆಟ್ಟ ಮಂಡಲ್ ನ ಮೊಮ್ಮಕೂರು ನದಿಯಲ್ಲಿ ನಡೆದಿದೆ.

ಮೊಮ್ಮಕೂರು ನದಿಯಲ್ಲಿ ಮಸ್ತಿ ಮಾಡುತ್ತಿದ್ದಾಗ ಮೂವರು ಮುಳುಗಿದ ವಿಡಿಯೋ ವೈರಲ್ ಆಗಿದೆ. ಮೇಕಲಗಟ್ಟು ಪ್ರದೇಶದ ಅವಿನಾಶ್ ಎಂಬುವರು ತಮ್ಮ ಪತ್ನಿ ದಿವ್ಯ ಹಾಗೂ ಆಕೆಯ ಇಬ್ಬರು ಸಹೋದರಿಯರ ಜೊತೆ ಮೊಮ್ಮಕೊರು ಡ್ಯಾಂಗೆ ಪಿಕ್ ನಿಕ್ ಗೆಂದು ಬಂದಿದ್ದರು. ಈ ವೇಳೆ ಮೋಜು ಮಸ್ತಿ ಮಾಡುತ್ತಿದ್ದಾಗ ನಿಂತದಲ್ಲಿಯೇ ಉರುಳಿ ಬಿದ್ದ ಮೂವರು ಮತ್ತೆ ಮೇಲೇಳಲಿಲ್ಲ.

ಇನ್ನು ದಡದ ಮೇಲಿದ್ದ ಅವಿನಾಶ್ ಪತ್ನಿ ದಿವ್ಯ ಕಣ್ಮುಂದೆ ಮೂವರು ಜಲಸಮಾಧಿಯಾಗುತ್ತಿದ್ದನ್ನು ನೋಡಿ ಸ್ಥಳೀಯರನ್ನು ಕೂಗಿ ಕರೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರ ಪ್ರಾಣ ಪಕ್ಷಿ ಹಾಕಿಹೋಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ವಿಮ್ಮರ್ ಗಳ ಸಹಾಯದಿಂದ ಮೂವರ ಮೃತದೇಹಗಳನ್ನು ಮೇಲೆ ತಂದ್ದಿದ್ದು, ತನಿಖೆ ಮುಂದುವರೆದಿದೆ.

Related posts

ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಉಡುಂಬಾ ನಿರ್ದೇಶಕ ಶಿವರಾಜ್ ತಯಾರಿ – ಶೀಘ್ರದಲ್ಲೇ ಟೈಟಲ್ ರಿವೀಲ್.

Kannada Beatz

N1ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

Kannada Beatz

ರಮೇಶ್ ಅರವಿಂದ್ ಅವರಿಂದ ಅನಾವರಣವಾಯಿತು ಡಾರ್ಕ್ ಕಾಮಿಡಿ ಜಾನರ್ ನ “chef ಚಿದಂಬರ” ಚಿತ್ರದ ಟ್ರೇಲರ್ .

Kannada Beatz

Leave a Comment

Share via
Copy link
Powered by Social Snap