ಕಳೆದ ವಾರವಷ್ಟೇ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಮತ್ತು ಸ್ಟಾರ್ ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಸತತ ಎರಡು ದಿನಗಳ ಕಾಲ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸ್ಟಾರ್ ನಟರಿಗೆ ಬಿಡುವು ಕೊಡದಂತೆ ದಾಖಲೆಗಳನ್ನು ಪರಿಶೀಲಿಸಿದರು.ಯಶ್ ಪುನೀತ್ ಸುದೀಪ್ ಮತ್ತು ಶಿವಣ್ಣ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು.
ಹೀಗಿರುವಾಗ ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನೆಂದರೆ ಎಲ್ಲಾ ಸ್ಟಾರ್ ಮನೆಗಳ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ದರ್ಶನ್ ಅವರ ಮನೆಯ ಮೇಲೆ ಯಾಕೆ ದಾಳಿ ಮಾಡಲಿಲ್ಲ ಎಂಬುದು. ಹೌದು ಈ ರೀತಿಯ ಕುತೂಹಲ ಮೂಡದೆ ಇರಲಿಲ್ಲ ದರ್ಶನ್ ಮೇಲೆ ಯಾಕೆ ಐಟಿ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಆದರೆ ಐಟಿ ಅಧಿಕಾರಿಗಳು ದರ್ಶನ್ ಅವರ ಮನೆಯ ಮೇಲೆ ದಾಳಿ ನಡೆಸದೇ ಇರಲು ಒಂದು ಕಾರಣವಿದೆ. ಹೌದು ದರ್ಶನ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸದೇ ಇರಲು ಕಾರಣವೇನೆಂದರೆ ಡಿ ಬಾಸ್ ಅವರು ತಮ್ಮ ಆಸ್ತಿಯ ಮೇಲೆ ಇರುವ ಎಲ್ಲ ರೀತಿಯ ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿರುವುದು.
![](https://kannadabeatz.com/wp-content/uploads/2019/01/IMG_20190104_122027-1024x682.jpg)
ಹೌದು ಡಿ ಬಾಸ್ ಅವರು ತಮಗೆ ಬರುವ ಸಂಭಾವನೆ ಮತ್ತು ತಮ್ಮ ತೂಗುದೀಪ ಡಿಸ್ಟ್ರಿಬ್ಯೂಷನ್ ಮತ್ತು ಪ್ರೊಡಕ್ಷನ್ ಸಂಸ್ಥೆಗಳಿಂದ ಬರುವ ಆದಾಯದ ಮೇಲೆ ಸಮಯಕ್ಕೆ ಸರಿಯಾಗಿ ನಿಗದಿತ ತೆರಿಗೆಯನ್ನು ಪಾವತಿಸುವುದರ ಮೂಲಕ ಸರ್ಕಾರಕ್ಕೆ ಯಾವುದೇ ರೀತಿಯ ಅಡ್ಡಿಯನ್ನು ಮಾಡಿಲ್ಲ. ಹೀಗಾಗಿ ಐಟಿ ಅಧಿಕಾರಿಗಳು ದರ್ಶನ್ ಅವರ ಕರೆ ತಲೇನೂ ಸಹ ಹಾಕದೆ ಇದ್ದಾರೆ.
![](https://kannadabeatz.com/wp-content/uploads/2019/01/20190109_110329.jpg)